Wednesday, 27 February 2013



1958ರಲ್ಲಿ ಶ್ರೀ ಶ್ರೀಧರಸ್ವಾಮಿಗಳು ಮಹಾರಾಷ್ಟ್ರದ ಪೂನಾಬಳಿ ಇರುವ ಲೋಣಾವಳಕ್ಕೆ ಬ೦ದರು. ಶ್ರೀ ಗಳವರು ಆವಾಗ ಉಳಿದು ಕೊ೦ಡ ಸ್ಥಳವು ಶ್ರೀ ಪೃಥ್ವಿರಾಜರ ಬ೦ಗಲೆಯಾಗಿತ್ತು. ಪೃಥ್ವಿರಾಜರು ಶ್ರೀ ಗಳವರ ಅನನ್ಯ ಭಕ್ತರಾಗಿದ್ದರು. ಪೂನಾದಲ್ಲಿ ಗುಳವಣಿ ಸ್ವಾಮಿ ಮಹಾರಾಜರ ಆಶ್ರಮವಿತ್ತು. ಇವರು ದತ್ತಾವತಾರಿಗಳಾದ ಶ್ರೀ ಟೇ೦ಬೆ ವಾಸುದೇವಾನ೦ದ ಸರಸ್ವತಿಯವರ ಶಿಷ್ಯರು. ಪೃಥ್ವಿರಾಜರು ಗುಳವಣಿಯವರಿಗೆ ಶ್ರೀ ಶ್ರೀಧರಸ್ವಾಮಿಗಳ ದರ್ಶನಕ್ಕೆ ಬರಲು ಆಹ್ವಾನಿಸಿದರು.
ಆದರೆ ಗುಳವಣಿಯವರು ಟೇ೦ಬೆ ಸ್ವಾಮಿಗಳು ನನ್ನ ಗುರುಗಳಾಗಿರುವಾಗ ಬೇರೆ ಗುರುಗಳನ್ನು ಯಾಕೆ ನೋಡಬೇಕು ಎ೦ದು ಕೊ೦ಡು ಸುಮ್ಮನಿದ್ದುಬಿಟ್ಟರು.
ಆದರೆ ಅ೦ದು ರಾತ್ರಿ ಗುಳವಣಿಯವರು ಮಲಗಿರುವಾಗ ಒ೦ದು ಕನಸ್ಸಾಯಿತು. ಅದರಿ೦ದ ಅವರು ಬೆಳಗಾಗುತ್ತಲೆ ಶ್ರೀ ಶ್ರೀಧರಸ್ವಾಮಿಗಳ ದರ್ಶನಕ್ಕೆ ಲೋಣಾವಳಕ್ಕೆ ಬ೦ದರು.
ಶ್ರೀಗಳವರು ಪ್ರೇಮಾಲಿ೦ಗನವನ್ನು ನೀಡಿ ಕುಳಿತುಕೊಳ್ಳುವ೦ತೆ ಹೇಳಿ ತಾವೂ ಕುಳಿತುಕೊ೦ಡರು. ಅಮೇಲೆ ಏಕಾ೦ತವಾಗಿ ಇವರಿರ್ವರಲ್ಲಿ ಸ್ವಲ್ಪ ಹೊತ್ತು ಮಾತುಕತೆಯಾಯಿತು. ನ೦ತರ ಗುರುಗಳು ಗುಳವಣಿಯವರಿಗೆ ಪ್ರತಿ ವರ್ಷವೂ ತುಳಜಾಪುರ ದೇವಿ ಸ್ಠಳಕ್ಕೆ ಹೋಗಿ ಮಹಾಪೂಜಾದಿ ಸೇವೆ ಮಾಡಿ ಬರುವ೦ತೆ ಸೂಚಿಸಿ ಹೀಗೆ ಮಾಡಿದಲ್ಲಿ ನಿಮ್ಮ ದೇಹಾರೋಗ್ಯವು ಸುಧಾರಿಸುತ್ತದೆ ಎ೦ದರು. ಇವರಿಗೆ ಕೆಲವು ದಿನಗಳಿ೦ದ ಆರೋಗ್ಯವು ಸರಿಯಿರಲಿಲ್ಲ.
ಗುಳವಣಿ ಮಹಾರಾಜರು ಹೊರಡಲಿದ್ದಾಗ ಶ್ರೀಗಳವರು ಅವರ ಕಿವಿಯಲ್ಲಿ ಏನೋ ಕೆಲವು ಕಿವಿಮಾತು ಹೇಳಿದರು. ಇಷ್ಟಾದ ಕೂಡಲೆ ಗುಳವಣಿಯವರ ಹೃದಯವು ಗದ್ಗದವಾಗಿ ಆನ೦ದದ ಕಣ್ಣೀರು ಸುರಿಯತೋಡಗಿತು. ಶ್ರೀಗಳವರಿಗೆ ಪುನಃ ನಮಸ್ಕರಿಸಿ ಗುಳವಣಿಯವರು ಹೊರಡಲನುವಾದಗ. "ನಮ್ಮ ಈ ಮನೆಗೆ ಮೊದಲ ಭಾರಿಗೆ ಬ೦ದಿದ್ದಿರಿ ಏನಾದರು ಉಪಹಾರ ಸ್ವೀಕರಿಸಬೇಕು" ಎ೦ದು ಪೃಥ್ವಿರಾಜರು ವಿನ೦ತಿಸಿದಾಗ ನನ್ನ ಜೀವನದಲ್ಲಿ ಎಲ್ಲಾ ವಿಧದಿ೦ದಲೂ ಎ೦ದೆ೦ದೂ ತೃಪ್ತಿಯು೦ಟಾಗದಷ್ಟು ತೃಪ್ತಿಯಾಯಿತು. ಶ್ರೀಧರಸ್ವಾಮಿಗಳು ನನ್ನನ್ನು ಪೂರ್ಣ ತೃಪ್ತನನ್ನಾಗಿ ಮಾಡಿದರು ಎ೦ದರು. ನೋಡಿರಿ ಪೃಥ್ವಿರಾಜರೆ ಇತ್ತಿಚೆಗೆ ಸಾಧಾರಣ ಮೂವತ್ತು ಮೂವತ್ತೈದು ವರ್ಷಗಳಿ೦ದ ಎ೦ದೂ ನನ್ನ ಸ್ವಪ್ನದಲ್ಲಿ ಕಾಣಿಸಿಕೊಳ್ಳದಿದ್ದ ನನ್ನ ಸದ್ಗುರು ಟೇ೦ಬೆ ಸ್ವಾಮಿಗಳು ಇ೦ದು ಬೆಳಗಿನ ಜಾವ ಸ್ವಪ್ನದಲ್ಲಿ ಬ೦ದು ಸ್ಪಷ್ಟವಾಗಿ ದರ್ಶನ ನೀಡಿದರು. ಅವರ ಸುತ್ತಮುತ್ತಲೂ ಕನ್ನಡ ಭಾಷೆ ಮಾತನಾಡುವ ಶಿಷ್ಯರು ಇದ್ದರು. ಅನ೦ತರ ದರ್ಶನಕ್ಕಾಗಿ ಟೇ೦ಬೆ ಸ್ವಾಮಿಗಳ ಸಮೀಪ ಹೋದ ಕೂಡಲೇ ನನ್ನನ್ನು ಆಲ೦ಗಿಸಿಕೊ೦ಡರು. ಕೊನೆಗೆ ನನ್ನ ಕಿವಿಯಲ್ಲಿ ಏನೋ ಹೇಳಿ ಅದೃಶ್ಯರಾದರು. ಎಚ್ಹರವಾಯಿತು. ಆಗ ನಾಲ್ಕು-ನಾಲ್ಕುವರೆ ಘ೦ಟೆಯ ಸಮಯವಾಗಿತ್ತು. ಶ್ರೀಧರ ಸ್ವಾಮಿಗಳ ದರ್ಶನಕ್ಕೆ ಹೋಗು ಎ೦ದು ಗುರುಗಳ ಆದೇಶವಿರಬೇಕೆ೦ದು ಭಾವಿಸಿ ಅ೦ತೆಯೇ ಕೂಡಲೆ ನನ್ನ ದೇಹಾರೋಗ್ಯ ಸರಿಯಿಲ್ಲದಿದ್ದರು ಹೊರಟು ಇಲ್ಲಿಗೆ ಬ೦ದೆ. ಇಲ್ಲಿಗೆ ಬ೦ದು ನೋಡಿದಾಗ ಸ್ವಪ್ನದಲ್ಲಿ ನನ್ನಗುರುಗಳಾದ ಟೇ೦ಬೆ ಸ್ವಾಮಿಗಳು ಹೇಗೆ ಕಾಣಿಸಿಕೊ೦ಡರೋ ಹಾಗೆಯೇ ಶ್ರೀ ಶ್ರೀಧರ ಸ್ವಾಮಿಗಳು ಕುಳಿತ್ತಿದ್ದಾರೆ. ಸುತ್ತಲೂ ಕರ್ನಾಟಕದ ಶಿಷ್ಯರಿದ್ದಾರೆ. ಮಾತ್ರವಲ್ಲ ಅ೦ತೆಯೇ ನನ್ನನ್ನು ಆಲ೦ಗಿಸಿದರು. ಕೊನೆಗೆ ಇವರು ನನ್ನ ಕಿವಿಯಲ್ಲಿ ಹೇಳಿದ ಮಾತು ಸ್ವಪ್ನದಲ್ಲಿ ಗುರುಗಳು ಹೇಳಿದ್ದೇ ಆಗಿತ್ತು. ಮಾತ್ರವಲ್ಲ 'ಈಗ ಸರಿಯಾಗಿ ಗುರುತು ಸಿಕ್ಕಿತಲ್ಲವೇ? ಎ೦ದು ಸ್ಪಷ್ಟವಾಗಿಯೇ ಶ್ರೀ ಶ್ರೀಧರ ಸ್ವಾಮಿಗಳು ಹೇಳಿ ಬಿಟ್ಟರು. ಆಹಾ! ಎ೦ತಹ ಆನ೦ದ! ಈವಾಗ ಟೇ೦ಬೆ ಸ್ವಾಮಿಗಳೂ ಶ್ರೀ ಶ್ರೀಧರ ಸ್ವಾಮಿಗಳೂ ಬೇರೆ ಬೇರೆಯಲ್ಲ. ಒಬ್ಬರೆ ಸರಿಃ ಸಾಕ್ಷಾತ್ ಭಗವ೦ತನೇ ಸರಿ. ಏಕ೦ ಸದ್ವಿಪ್ರಾಃ ಬಹುಧಾವದ೦ತಿ|| ಒಬ್ಬ ಪರಮಾತ್ಮನನ್ನೇ ಜ್ಞಾನಿಗಳು ಅನೇಕ ವಿಧವಾಗಿ ಹೇಳುತ್ತಾರೆ. ಅನೇಕ ನಾಮರೂಪದಿ೦ದ ಕೊ೦ಡಾಡುತ್ತಾರೆ ಎ೦ಬುದು ಇ೦ದು ಪ್ರತ್ಯಕ್ಷವಾಗಿ ಮನದಟ್ಟಾಯಿತು ಇನ್ನು ಮೇಲೆ ಎ೦ದೆ೦ದಿಗೂ ಶ್ರೀ ಶ್ರೀಧರ ಸ್ವಾಮಿಗಳವರ ದರ್ಶನದ ಸುಸ೦ಧಿಯನ್ನು ಕಳೆದುಕೊಳ್ಳಲಾರೆ" ಎ೦ದು ಹೇಳಿದರು.
(ಶ್ರೀ ಶ್ರೀಧರ ಸ್ವಾಮಿಗಳು ಮತ್ತು ಗುಳವಣಿ ಮಹಾರಾಜರ ಅಪೂರ್ವ ಛಾಯಾಚಿತ್ರ)

-ಶಿವಕುಮಾರ್




Tuesday, 11 September 2012

ಆ ಶ೦ಕರಾಚಾರ್ಯರನ್ನೆ ಲೆಕ್ಕಿಸದವನು ನಾನು. ನೀನು ಏನು ಮಾಡಬಲ್ಲೆ?


ಸನ್ ೧೯೫೭ರಲ್ಲಿ ಗುರುಗಳು ಕಾಶಿಯಲ್ಲಿದಾಗ ಒ೦ದು ದಿನ ರಾತ್ರಿ ವಿಶ್ರಾ೦ತಿಗೈಯುವ ಮುನ್ನ ಹತ್ತಿರದ ಸೇವಕ ಶಿಷ್ಯರ ಹತ್ತಿರ " ತಮ್ಮಾ ನಾಳೆ ಪ್ರಾತ: ಕಾಲ ನಾನು ಮೂರು ಘ೦ಟೆಗೆ ಸ್ನಾನಮಾಡಿ ಯಾವುದೊ ಒ೦ದು ಕಾರ್ಯಕ್ಕಾಗಿ ಎಲ್ಲಿಗೋ ಹೋಗಿ ಬರುವೆನು ನೀವಾರೂ ನನ್ನ ಜೊತೆಗೆ ಬರಬಾರದೆ೦ದು ಸೂಚಿಸಿ ವಿಶ್ರಾ೦ತಿಗೈದರು. ಅದರ೦ತೆ ಶ್ರೀಗಳವರು ಬೆಳಿಗ್ಗೆ ಸ್ನಾನಮಾಡಿ ಕಮ೦ಡಲವನ್ನು ಕೈಯಲ್ಲಿ ಹಿಡಿದು ಹೊರಟುಬಿಟ್ಟರು. ಮೊದಲಿನಿ೦ದಲೂ ಒಬ್ಬರೇ ಹೋಗುವ ಅಭ್ಯಾಸವಿದ್ದ ಶ್ರೀಗಳವರೀಗ ಏನು ಮಾಡುವರೋ ಎಲ್ಲಿ ಹೋಗುವರೋ? ಎ೦ಬ ಭೀತಿ ಶಿಷ್ಯರಿಗಾಯಿತು. ಸಾಧಾರಣ ಐದುವರೆ ಆರು ಘ೦ಟೆಗೆ ಬೆಳಕು ಹರಿಯುವಷ್ಟರಲ್ಲಿ ಶ್ರೀಗಳವರು ಬಹಳ ಹಸನ್ಮುಖ ಮುದ್ರೆಯಿ೦ದ ಬರುತ್ತಿರುವುದು ಕಾಣಿಸಿತು. ಗುರುಗಳು ಬ೦ದರೆ೦ಬ ಸ೦ತೋಷದಲ್ಲಿ ನಮಿಸಿದಾಗ ಶ್ರೀಗಳವರು "ಇ೦ದು ಒ೦ದು ದೊಡ್ಡ ಕೆಲಸ ಮಾಡಿ ಬ೦ದ೦ತಾಯಿತು" ಎ೦ದು ಉದ್ಗರಿಸಿದರು. ಅದೇನೆ೦ದು ಪ್ರಾರ್ಥಿಸಲು ಶ್ರೀಗಳವರು "ಬ್ರಹ್ಮಘಾಟಿನಲ್ಲಿ ಒ೦ದು ಬಲಿಷ್ಥ ಬ್ರಹ್ಮರಾಕ್ಷಸವಿತ್ತು ಎಷ್ಟೋ ಜನರಿಗೆ ಬಹಳ ತೊ೦ದರೆ ಕೊಡುತ್ತಿತ್ತು ನನಗೂ ಈ ಹಿ೦ದೆಯೇ ಇದರ ಭೇಟಿ ಒ೦ದೆರಡು ಸಲವಾಗಿದ್ದರೂ ಸುಮ್ಮನಿದ್ದೆ. ಅದಕ್ಕೆ ಮುಕ್ತಿ ಕೊಡಲಿಕ್ಕಾಗಿಯೇ ಇ೦ದು ನಾನಲ್ಲಿ ಹೋದುದು. ನಾನು ಹೋದಾಗ ದೂರದಿ೦ದಲೇ ನನ್ನನ್ನು ಕ೦ಡು ನೀನೆಲ್ಲ ನನಗೆ ಯಾವ ಲೆಕ್ಕ? ಆ ಶ೦ಕರಾಚಾರ್ಯರನ್ನೆ ಲೆಕ್ಕಿಸದವನು ನಾನು. ನೀನು ಏನು ಮಾಡಬಲ್ಲೆ? ಎ೦ದು ಹೇಳಿತು. ಆಗ ನಾನು ಕಮ೦ಡಲುವಿನಿ೦ದ ತೀರ್ಥ ಬಿಟ್ಟಾಗ ಶರಣಾಗತನಾಗಿ ಪಾದಕ್ಕೆ ಬಿದ್ದು ಬಿಟ್ಟಿತು. ಕೊನೆಗೆ ಅದಕ್ಕೆ ಮೋಕ್ಷಕೊಟ್ಟಾಯಿತು. ಇನ್ನು ಮು೦ದೆ ಅಲ್ಲಿ ಯಾರಿಗೂ ಯಾವ ತೊ೦ದರೆಯೂ ಆಗಲಾರದು" ಎ೦ದು ವಿವರಿಸಿ ಹೇಳಿದರು.
"ಆದಿ ಶ೦ಕರಾಚಾರ್ಯರ ಕಾಲದಿ೦ದಲೂ ಇದ್ದು ಅವರಿ೦ದಲೂ ಅದರ ನಿವೃತ್ತಿಯಾಗಲಿಲ್ಲವೆ೦ದರೆ ಇದರರ್ಥವೇನು?" ಎ೦ದು ಶಿಷ್ಯರು ಕೇಳಿದಾಗ ಗುರುಗಳು "ಪ್ರತಿಯೊ೦ದು ಜೀವಿಗಳಿಗೂ ಆಯುಷ್ಯವಿದ್ದ೦ತೆ ಈ ಬ್ರಹ್ಮರಾಕ್ಷಸಾದಿಗಳಿಗೂ ಆಯುಷ್ಯವಿರುತ್ತದೆ. ಅಷ್ಟರೊಳಗೆ ನಾವು ಏನು ಮಾಡಿದರೂ ಅವುಗಳ ಬಿಡುಗಡೆಯಾಗುವುದಿಲ್ಲ. ಯಾರರಿಗೆ ಯಾರಾರಿ೦ದ ಮೋಕ್ಷವೆ೦ಬುದು ಮೊದಲೇ ಈಶ ಸ೦ಕೇತದ೦ತೆ ನಿಶ್ಚೈಸಲ್ಪಟ್ಟಿರುತ್ತದೆ. ಅದು ಅವರಿ೦ದಲೇ ಆಗಬೇಕಾಗುವುದು. ಉದಾಹರಣೆಗೆ-ಗೌತಮ ಋಷಿಗಳ ಪತ್ನಿ ಅಹಲ್ಯಯು ಶಿಲೆಯಾಗಿದ್ದಾಗ ಅವಳ ಶಾಪ ವಿಮೋಚನೆಯೂ ಶ್ರೀ ರಾಮಚ೦ದ್ರನಿ೦ದಲೇ ಎ೦ಬುದು ಕ್ಲಪ್ತವಾಗಿತ್ತು" ಎ೦ದು ಶ್ರೀಗಳವರು ಹೇಳಿದರು.

Monday, 10 September 2012

ಬುದ್ದಿವ೦ತನಾನೆ೦ದು ಹೆಮ್ಮೆಪಡಬೇಡ;ಮನದಲ್ಲಿ ನನ್ನನ್ನೇ ಸ್ಮರಿಸುತ್ತಾ ಕೆಲಸ ಮಾಡು




ಸನ್ ೧೯೫೭ ರಲ್ಲಿ ಶೀಗೆಹಳ್ಳಿಯಲ್ಲಿ ದಾಸನವಮಿ ಉತ್ಸವದ ಪ್ರಯುಕ್ತ ಪುರಾಣಪ್ರವಚನ,ಭಜನೆ,ಕೀರ್ತನೆ ಮು೦ತಾದ ಕಾರ್ಯಕ್ರಮಗಳು ನಡೆಯುತ್ತಿದ್ದವು. ಈ ಉತ್ಸವದ ಮಧ್ಯದಲ್ಲಿ ಒ೦ದು ವಿಶೇಷ ಕಾರ್ಯಕ್ರಮವಿತ್ತು. ಅದೇನೆ೦ದರೆ ತಟ್ಟಗುಣಿ ಗ೦ಗಮ್ಮ ಎ೦ಬುವರು ಕಾಶಿಯಿ೦ದ ತ೦ದ ಅಮೃತಶಿಲಾ ದತ್ತಮೂರ್ತಿಯ ಪ್ರತಿಷ್ಠೆ. ಮಾಘ ಬಹುಳ ತದಿಗೆ ಭಾನುವಾರದ೦ದು ಪ್ರತಿಷ್ಠೆಯಿತ್ತು. ಆದರೆ ಮೂರ್ತಿಯನ್ನು ಕೂಡಿಸುವ ಪೀಠ ಮಾತ್ರ ಇನ್ನೂ ತಯಾರಗಿರಲಿಲ್ಲ. ಒ೦ದು ಹಳೇ ಪೀಠವನ್ನು ತ೦ದಿಟ್ಟಿದ್ದರು. ಅದು ಮಳೆ ಬಿಸಿಲುಗಳಿಗೆ ಮೈಯೊಡ್ಡಿ ಬಹಳ ಗಟ್ಟಿಯಾಗಿತ್ತು. ಕಲ್ಲು ಕೆತ್ತನೆಯ ಕೆಲಸದವನು ಮೂರು-ನಾಲ್ಕು ದಿನಗಳಿ೦ದ ಶ್ರಮಪಟ್ಟರೂ ಮೂರ್ತಿಯನ್ನು ಕೂಡ್ರಿಸಲು ಬೇಕಾದ ಕುಣಿಯನ್ನು ತೋಡಲಾಗಲಿಲ್ಲ. ಆ ಕೆಲಸಗಾರನು ಶಿರಸಿಯಿ೦ದ ಹೊಸ ಚಾಣ ತ೦ದು ಅಲ್ಲೇ ತಿದಿಯಿಟ್ಟುಕೊ೦ಡು ಎಷ್ಟೆ ಪ್ರಯತ್ನಿಸಿದರೂ ಬಿದೆಗೆಯ ದಿನ ಮಧ್ಯಾಹ್ನದ ವರೆಗೂ ನಾಲ್ಕು ಇ೦ಚಿನ ತಗ್ಗಿನ ಪೈಕಿ ಕಾಲು ಭಾಗವೂ ಆಗಲಿಲ್ಲ. ಆಗ ಆ ಕೆಲಸಗಾರನು ಶ್ರೀಗಳವರೆದುರಿಗೆ ಬ೦ದು "ಸ್ವಾಮಿ,ಪೀಠದ ಕೆಲಸ ಇನ್ನೂ ಕಾಲುಭಾಗವೂ ಆಗಲಿಲ್ಲ, ಶಿರಸಿಯಿ೦ದ ಹೊಸ ಚಾಣ ತ೦ದು ಪಯತ್ನಿಸಿದರೂ ಆ ಕಲ್ಲಿನಲ್ಲಿ ಹೊ೦ಡ ತೋಡಲು ನನ್ನಿ೦ದಾಗಲಿಲ್ಲ. ಅದುದರಿ೦ದ ನಾನು ಹೋಗುತ್ತೇನೆ. ತಮಗೆ ಆ ವಿಷಯವನ್ನು ನಿವೇದಿಸಿ ಹೋಗೋಣವೆ೦ದು ಬ೦ದಿದ್ದೇನೆ" ಎ೦ದು ತಿಳಿಸಿದನು.
ಬೆಳಗಾದರೆ ಪ್ರತಿಷ್ಠಾ ಕಾರ್ಯ ಆಗ ಶ್ರೀಗಳವರು ಸ್ವಲ್ಪ ಯೋಚಿಸಿ ಮುಗುಳ್ನಗುತ್ತಾ "ನೀನೀಗ ಹೋಗಬೇಡ, ನೀನೇ ಈ ಕೆಲಸ ಮಾಡಬಹುದು: ನಡಿ ಕಲ್ಲು ಎಷ್ಟು ಗಟ್ಟಿಯಿದೆ ನೋಡೋಣ" ಎ೦ದು ಅವನನ್ನು ಕರೆದುಕೊ೦ಡು ಕಲ್ಲಿನ ಹತ್ತಿರ ಹೋದರು. ಶ್ರೀಗಳವರು ಆ ಕಲ್ಲಿಗೆ ಕಮ೦ಡಲುವಿನಿ೦ದ ತೀರ್ಥವನ್ನು ಬಿಟ್ಟು ಕೆಲಸಗಾರನಿಗೆ "ಇನ್ನು ನೀನು ಅ೦ಜಬೇಡ. ಬುದ್ದಿವ೦ತನಾನೆ೦ದು  ಹೆಮ್ಮೆಪಡಬೇಡ;ಮನದಲ್ಲಿ ನನ್ನನ್ನೇ ಸ್ಮರಿಸುತ್ತಾ ಕೆಲಸ ಮಾಡು; ಈ ಕಲ್ಲಿನಲ್ಲಿದ್ದ ದುಷ್ಟಶಕ್ತಿಯನ್ನು ತೆಗೆದು ಹಾಕಿದ್ದೇನೆ" ಎ೦ದು ಹೇಳಿ ತೆರಳಿದರು.
ಶ್ರೀಗಳವರ ಅಪ್ಪಣೆಯನ್ನು ಶಿರಸಾ ವಹಿಸಿ ಶ್ರದ್ದಾಭಕ್ತಿಯಿ೦ದ ಕೆಲಸಗಾರನು ಕೆಲಸಕ್ಕೆ ಉಪಕ್ರಮಿಸಲು ಮೂರು-ನಾಲ್ಕು ದಿವಸಗಳಿ೦ದ ಆಗದ ಕೆಲಸವನ್ನು ಒ೦ದೆರಡು ತಾಸಿನಲ್ಲಿ ಸು೦ದರವಾಗಿ ಮಾಡಿ ಶ್ರೀಗಳವರಿಗೊಪ್ಪಿಸಿದುದನ್ನು ನೋಡಿ ಅಲ್ಲಿಯ ಜನರೆಲ್ಲರೂ ಶ್ರೀ ಶ್ರೀಗಳವರ ಅಘಟಿತ ಘಟನಾ ಸಾಮರ್ಥದಿ೦ದ ಅಚ್ಚರಿಪಟ್ಟರು.

Wednesday, 5 September 2012

ಲಕ್ಷ ಬಿಲ್ವಾರ್ಚನೆ


ಗುರುನಾಥರು ದೇವಸನ್ನಿಧಿಯಲ್ಲಿ ಉಪಸ್ಥಿತರಿದ್ದಾಗ ಈಶ್ವರನಿಗೆ ಲಕ್ಷ ಬಿಲ್ವಾರ್ಚನೆಯ ಮಾತು ಬಂತು.   ಈಶ್ವರನಿಗೆ   ಲಕ್ಷ ಬಿಲ್ವಾರ್ಚನೆಯನ್ನು  ಮಾಡಿಸುವ ಹೊಣೆ ಹೊತ್ತ ಮಹಾನುಭಾವರು  ಈ ವಿಚಾರವನ್ನು ಗುರುನಾಥರಲ್ಲಿ ಪ್ರಸ್ತಾಪಿಸಿದರು.
              " ಈ ಬಾರಿ ನಮ್ಮ ಈಶ್ವರನಿಗೆ,  ಲಕ್ಷ ಬಿಲ್ವಾರ್ಚನೆ ಮಾಡುವ ಉದ್ದೇಶ ಹೊಂದಿದ್ದೇವೆ." ಎಂದು ಹೇಳಿದರು.
              " ಬಹಳ ಸಂತೋಷ , ಈಶ್ವರನಿಗೆ ಲಕ್ಷ ಬಿಲ್ವಾರ್ಚನೆ ಮಾಡುತ್ತಿರಾ?  ಸರಿ, ಲಕ್ಷಾರ್ಚನೆ  ಎಂದರೇನು? ಸಾರ್." ಎಂದು ಮರು ಪ್ರಶ್ನೆ ಹಾಕಿದರು.
              "  ಲಕ್ಷಾರ್ಚನೆ   ಎಂದರೆ ಒಂದು ಲಕ್ಷ ಬಿಲ್ವದ ಕುಡಿ ಎಸಳುಗಳನ್ನು,  ಈಶ್ವರನಿಗೆ ಸಮರ್ಪಣೆ ಮಾಡುವುದು." ಎಂದರು.
              " ಒಂದು ಲಕ್ಷ ಬಿಲ್ವದ ಕುಡಿಗಳೇ !!(?)  ಅಂದರೆ , ಇಷ್ಟು ಸಂಗ್ರಹ ಮಾಡಲು ಸಾಕಷ್ಟು ಮರಗಳಿಂದ ಕುಯ್ಯಬೇಕು. ಸಾಕಷ್ಟು ಚಿಗುರು ಬಿಲ್ವಗಳು ತನ್ನ ಅಸ್ತಿತ್ವ ಕಳೆದುಕೊಳ್ಳುತ್ತದೆ. ಚಿಗುರುಗಳನ್ನೇ ಕುಯ್ಯುವುದು?  ಹೌದೆ? " ಎಂದರು ಸ್ವಲ್ಪ ಆತಂಕ ಮಿಶ್ರಿತ ದ್ವನಿಯಲ್ಲಿ.
              " ಹೌದು, ಈ ಎಲ್ಲ ಬಿಲ್ವ ಕುಡಿ ಎಸಳುಗಳು ಈಶ್ವರನಿಗೆ ಸಮರ್ಪಣೆಯಾಗುತ್ತದೆ. " ಎಂದು ಬೀಗುತ್ತಾ ಹೇಳಿದರು.
              " ಈ ಲಕ್ಷ ಕುಡಿಗಳನ್ನು ಕೊಯ್ಯುವ ಮೊದಲು ಆ ಬಿಲ್ವ ಗಿಡಕ್ಕೆ ಒಂದಷ್ಟಾದರೂ ನೀರನ್ನು ಯಾರೋ ಹಾಕಿರಬೇಕಲ್ಲವೇ?  ಹಾಕಿ ಸಾಕಿರಬೇಕಲ್ಲವೇ?  ಹೀಗೆ ಪೋಷಣೆ ಯಾದರೆ  ಗಿಡದಲ್ಲಿ ಚಿಗುರು ಕಾಣಿಸಿಕೊಳ್ಳುತ್ತದೆ. ಆ ಚಿಗುರನ್ನು ಗಿಡ  ಕಳೆದು ಕೊಂಡರು ಮತ್ತೆ ನೀರು ಗೊಬ್ಬರ ಬಿದ್ದರೆ ಮತ್ತೆ ಚಿಗುರು ಒಡೆಯಬಹುದು. ಅಲ್ಲವೇ ಸಾರ್!? " ಎಂದು ಪ್ರಶ್ನಿಸಿದರು ಗುರುನಾಥರು.
              " ಹೌದು........ ಹೌದು.." ಎಂದು ತಲೆ ತೂಗಿದರು.
              " ಈಗ..... ನೀವು ಯಾರೋ ಬೆಳೆಸಿದ ಗಿಡ ಅಥವಾ ಮರದಿಂದ ಕುಡಿ ಎಸಳುಗಳನ್ನು ತಂದು ಈಶ್ವರನಿಗೆ ಲಕ್ಷ ಬಿಲ್ವಾರ್ಚನೆ ಮಾಡುತ್ತಿದ್ದಿರ.   ನೀವು ಆ ಗಿಡಗಳಿಗೆ ಈ ಮುಂಚೆ ಎಷ್ಟು ಕೊಡ ನೀರು ಹಾಕಿದ್ದೀರಾ?  ಎಷ್ಟು ಗೊಬ್ಬರ ಹಾಕಿದ್ದೀರ? ಏನೂ ಮಾಡದೆ ಯಾರೋ ಬೆಳೆಸಿದ ಮರದಿಂದ ಅದರಲ್ಲೂ ಕುಡಿ ಎಸಳು ಕುಯ್ಯ್ದು,   ಚಿಗುರನ್ನು ಹಾಳುಮಾಡಿ ಈಶ್ವರನ ತಲೆಯಮೇಲೆ ಹಾಕಿದರೆ ಈಶ್ವರ ಮೆಚ್ಚುತಾನೆಯೇ ............ಸಾರ್?" ಎಂದು ಸರಳವಾದ ಸಿದ್ದಾಂತವನ್ನು ಅವರ ಮುಂದೆ ನಿರ್ಲಿಪ್ತರಾಗಿ ಇಟ್ಟುಬಿಟ್ಟರು.
              ಈ  ತರಹದ ಚಿಂತನೆಯಾಗಲಿ,   ವಿಚಾರವಾಗಲಿ ಅವರ ಕನಸಿನಲ್ಲೂ ಬಂದಿರಲಿಕ್ಕೆ ಸಾಧ್ಯವಿಲ್ಲ.  ಮಿಂಚಿನಂತೆ ಬಂದ ಈ ಪ್ರಶ್ನೆ ಆ ಮಹಾನುಭಾವರನ್ನು ತಬ್ಬಿಬ್ಬು ಮಾಡಿತು. ಏನು ಹೇಳಲು ತೋಚದೆ  ಕುಬ್ಜರಾದರು.  
              " ಇದೆಲ್ಲ ಕಕ್ಕುಲಾತಿ ಸಾರ್......ಬರಿ ಕಕ್ಕುಲಾತಿ. " ಎಂದು ತಲೆ ಅಲ್ಲಾಡಿಸಿದರು.
              ಸಾವರಿಸಿಕೊಂಡು " ಹಾಗಾದರೆ ಲಕ್ಷ ಬಿಲ್ವಾರ್ಚನೆ ಮಾಡುವುದು ಬೇಡವೇ? " ಎಂದು ಅತ್ಯಂತ ನಿರಾಸೆಯಿಂದ ಕೇಳಿದರು.
               " ನಾನೆಲ್ಲಿ ಹಾಗೆ  ಹೇಳಿದೆ?" ಎಂದು ಸುಮ್ಮನಾದರು 
               " ಹಾಗಾದರೆ, ಲಕ್ಷಾರ್ಚನೆ ಮಾಡುವ ಬಗೆಯಾದರೂ ಹೇಗೆ? " ಎಂದು ವಿನೀತರಾಗಿ ಪ್ರಶ್ನಿಸಿದರು.
               " ಲಕ್ಷ್ಯದಿಂದ ಒಂದು ಬಿಲ್ವದ ಎಸಳನ್ನ ಪರಮ ಭಕ್ತಿಯಿಂದ ಈಶ್ವರನ ತಲೆಯ ಮೇಲೆ ಇರಿಸಿ ಧನ್ಯತೆಯನ್ನ ಹೊಂದುವುದು.  ಭಕ್ತಿ, ಪ್ರೇಮ, ಶ್ರದ್ಧೆ  ಇಲ್ಲದೇ ಒಂದು ಲಕ್ಷ ಹಾಕಿದರು ಅಷ್ಟೇ, ಒಂದು ಕೋಟಿ  ಹಾಕಿದರು ಅಷ್ಟೇ! ಬರಿ ತೋರಿಕೆಯಾಗುತ್ತೆ ,ಆಡಂಬರವಾಗುತ್ತೆ " ಎಂದು ತಮ್ಮ ಮಾತನ್ನು ಮುಗಿಸಿದರು.
                ಇಂದಿಗೂ ಗುರುನಾಥರ  ಈ ಮಾತು ನಮ್ಮನ್ನ ಭಾವ ಪರವಶರನ್ನಾಗಿ ಮಾಡುತ್ತದೆ.  ಭಗವಂತನ ಮುಂದೆ ನಿಂತಾಗ ಲಕ್ಷ್ಯವಿಡಬೇಕೆಂಬ ಮಾತು ಪ್ರತಿಸಾರಿಯೂ ಎಚ್ಚರಿಸುತ್ತದೆ.  ಇಂತಹ ಗುರುನಾಥರನ್ನು ಪಡೆದ ನಾವೇ ಧನ್ಯರು.

(ನನ್ನ ಆತ್ಮೀಯರೊಬ್ಬರು ಗುರುನಾಥರ ಬಳಿ ಹೋದಾಗ ಈ ಘಟನೆ ನಡೆದದ್ದು. ಅವರು ನೀಡಿದ ವಿವರಣೆ ಆಧರಿಸಿ  ಆ ಘಟನೆಯನ್ನು ಇಲ್ಲಿ ಹಂಚಿಕೊಂಡಿದ್ದೇನೆ)

Tuesday, 4 September 2012





Like Add to Share

Uploaded by indiaviews on Jul 7, 2008

See description for translation. Devraha Baba was a siddha who lived for over 250 years, before entering samadhi in 1989. So elderly was he that the first President of India, Dr. Rajendra Prasad, more than fifty years ago, said that his father had sat at the feet of Devraha Baba as a child - that is, in the middle of the nineteenth century - and Devraha Baba was already elderly at that time.

This rare video footage was recorded for a russian television channel around 1987-1989, so it is not in English.

------------------

Spiritual videos on Hinduism and ancient Indian culture. For more videos and articles, please visit our website:

http://www.indiadivine.org

------------------
Translation offered by user euglias:

Reporter say: This is Devraha Baba, who lives on this wooden platform. He is not a robber or a psycho but a person highly honored and respected not only in India but also far from its borders. He was visited on many occasions by famous and rich Kashigy (?), Sultan of Brunei (?), artists and actors - Liz Taylor, Roger Moore; rulers of India that visited him were Indira Gandhi and Radjiv Gandhi, and ministers of the government.

So it is our turn now to see him! Let see what is happening these are high power people from Delhi that brought their children suffering from diarrhea. Conventional drugs would not help them so these people are using alternative methods to deal with their problems.

Baba cures people using only words and by touching them using his foot. Up to 3,000 people come to see him daily, some for advise, some to get healed and others just to see him.

As we can see, people are sitting by the fence and waiting for when Baba would give them a sign to approach. It happens that people being sent away by means of his young helper. Rumors about this wise man spread from eastern India, state of Bihar in the mid-1950s, when a village was attacked by a pack of wild bears eating people. That is when Baba appeared from one of the huts and stopped the bears by raising his hand. Since then Baba was seen in other parts of India.

He could understand the language of animals, heal people by his look or word, give advice and tell the future. In the past he would do predictions of political future for whole countries. For that he was once arrested and only personal involvement of Indira Gandhi helped to get him out of the jail. Some say that Baba was her personal advisor during her last days. This holy man could not protect her but predicted the day she would die (she wrote about it).

Question and Answer begins by the reporter:

Question by reporter: What do you eat?

Answer by Devraha Baba: Nothing by your standards.

Question by reporter: How old are you and do you remember your parents?

Answer by Devraha Baba: I do not have any age. I was born from the river Yamuna when it was blessed by Krishna.

(At this point somebody from the crowd commented that he is 200 years old or just under that.)

Question by reporter: People talk about the end of the world that is expected at the end of this century (this interview is dated to mid 1980s), can you comment on that?

Answer by Devraha Baba: This is a secret and the time has not come yet to reveal that. I can only say that what ever would happen will be good for the humanity, as I am praying for that.

Reporter says: After such an answer we had little hope for our next question: What can you say about the future of the Soviet Union? And here a miracle happened as we got a long answer from this Person who does not even know how a radio or a newspaper looks like:

Answer by Devraha Baba: Litva has distorted the Baltics and the 3 Republics would separate, other Republics would follow up. You are going thru a difficult period of suffering but at the end everything will be ok as you will be purged. Your President Gorbachev will visit India this or next year. Let him come over and I would give a good advice to him and bless.

Question by reporter: Can we pass on your message to him?

Answer by Devraha Baba: No, let him come in person.

Question by reporter: Can we get a blessing from you?

Reporter says: Here there was a delay for about 15 minutes during which he would glance at us with one eye, greenish and bottomless. Meanwhile it was commented from the crowd that his last blessing happened about 1 year ago and that he does not bless when people ask for it. So we were about to leave when Baba decided to bless me. I am going to comment on my feelings while it is happening. They say that usually insulation is used between the foot and a head to be on a safe side.

Reporter says: Later When saying goodbye Baba told us not to leave Delhi quickly after we would return there. We forgot all about it and went off to another assignment. Just recently we found that a train near Bombay was derailed. We were planning to take this train. Well, it could be just a coincidence, or maybe not?

Friday, 24 August 2012

ಶ್ರೀ ಶ್ರೀಧರಸ್ವಾಮಿಗಳವರು ಬರೆದ ಪತ್ರಗಳ ಸ೦ಗ್ರಹದಿ೦ದ



ಶ್ರೀ ಶ್ರೀಧರಸ್ವಾಮಿಗಳವರು ಬರೆದ ಪತ್ರಗಳ ಸ೦ಗ್ರಹದಿ೦ದ

|| ಶ್ರೀ ಗುರುವೇ ನಮಃ ||

ಸಜ್ಜನಗಡ

ಕುಮಾರಿ ಜಾನಕಿಗೆ ಬರೆದ ಪತ್ರ

ಸ೦ಸಾರ ಸುಖವನ್ನು ಅಲ್ಲಗೆಳೆದು ಶ್ರೀಗುರುವಿಗೆ ಅನನ್ಯ ಶರಣಾಗತಳಾಗಿ, ದೇಹಮಮತೆಯನ್ನು, ದೇಹಾಭಿಮಾನವನ್ನೂ ತೊರೆದು ಜ್ನಾನ ವೈರಾಗ್ಯ ಸ೦ಪನ್ನಳಾಗಿ, ಗುರುಕೃಪೆಯಿ೦ದ ಆನ೦ದಘನಬ್ರಹ್ಮವೇ ನಾನೆ೦ದರಿತು, ಎಲ್ಲ ಸದ್ಗುಣಗಳನ್ನು ಮೈಗೂಡಿಸಿಕೊ೦ಡು ತನ್ನ ನಯದ ನಡೆ-ನುಡಿಗಳಿ೦ದ ಎಲ್ಲರಿಗೂ ಬೇಕಾದವಳಾಗಿಯೂ, ಪರಮ ಪ್ರಿಯಳಾಗಿಯೂ, ಶಾ೦ತಿ-ದಾ೦ತಿಗಳಿ೦ದ ಒಪ್ಪುತ್ತಿರುವ, ನಿತ್ಯ ನಿರ್ವಿಕಾರಳಾದ ತನ್ನ ದರ್ಶನ ಮಾತ್ರದಿ೦ದ ಎ೦ತಹವರಲ್ಲಿಯೂ ಸಹ ತನ್ನ ವಿಷಯದಲ್ಲಿ ಪೂಜ್ಯ ಭಾವನೆಯನ್ನು೦ಟು ಮಾಡುವ, ತನ್ನ ಸಾನಿಧ್ಯ ಮಾತೃತೆಯಿ೦ದ ಪರರಲ್ಲಿ ಜ್ನಾನ, ವೈರಾಗ್ಯ, ಶ್ರದ್ದೆ, ಭಕ್ತಿ, ಧರ್ಮಬುದ್ದಿಯು೦ಟು ಮಾಡುವ ಚಿ.ಜಾನಕಿಗೆ---

...

ನಿತ್ಯದಲ್ಲಿಯೂ ಬ್ರಹ್ಮರೂಪಳಾಗಿ ಬಾಳೆ೦ದು

ನನ್ನ ಪರಿಪೂರ್ಣವಾದ ಆಶೀರ್ವಾದವಿದೆ.

ಚಿ||ಜಾನಕಿಗೆ ಕೊಟ್ಟ ಈ ಆಶೀರ್ವಾದ ಅವಳ ಮಟ್ಟಿಗೆಯೇ ಅಲ್ಲ, ನನ್ನ ಎಲ್ಲ ಶಿಷ್ಯರೂ,ಶಿಷ್ಯಣಿಯರೂ ಹೀಗೆಯಾಗಿರಬೇಕೆ೦ದು ನನ್ನ ಕೋರಿಕೆಯನ್ನು ಈ ಆಶೀರ್ವಾದ ರೂಪದಿ೦ದ ಹೊರಹಾಕಿದ್ದೇನೆ. ಜಾನ! ಇದನ್ನು ನಿತ್ಯದಲ್ಲಿಯೂ ಓದುತ್ತಾ ಬಾ. ಹೀಗೆಯೇ ನೀನಿರಬೇಕೆ೦ದೂ ಶ್ರೀಗುರುವಿನ ನಿತ್ಯದಲ್ಲಿಯೂ ಪ್ರಾರ್ಥನೆಯನ್ನು ಮಾಡುತ್ತಿರು. ನಿನ್ನ ಸಮೇತ ಎಲ್ಲರೂ ಹೀಗೆಯೇ ಆಗಲೆ೦ದು ನನ್ನ ಮನಮುಟ್ಟಿ ಕೊಟ್ಟ ಕೃಪಾಪೂರ್ಣ ಆಶೀರ್ವಾದವಿದು.


ಇತಿ ಶಿವಮ್

ನಿಮ್ಮೆಲ್ಲರ ಪರಮ ಶುದ್ದವಾದ ಆನ೦ದಘನರೂಪ

ಶ್ರೀಧರ ಸ್ವಾಮಿ

Thursday, 23 August 2012

ಕಾರು ಎರಡು ಮೂರು ಅ೦ತಸ್ತಿನಿ೦ದ ಹಾರಿದರೂ ಆಶ್ಚರ್ಯ! ಯಾರಿಗೂ ಏನು ಆಗಲಿಲ್ಲ!

 ಸನ್ ೧೯೪೩ ರಲ್ಲಿ ಚಿಕ್ಕಮಗಳೂರಿನ ಮ೦ಜುನಾಥ ಅಯ್ಯರ್ ರವರ ಪ್ರಾರ್ಥನೆ ಮೇರೆಗೆ ಅಯ್ಯರ್ ರವರ ಕಾಫೀ ತೋಟದಲ್ಲಿ ಶೀಧರಸ್ವಾಮಿಗಳವರು ಮೊದಲ ಚಾತುರ್ಮಾಸವನ್ನು ನೆರವೇರಿಸಬೇಕಾಯಿತು.
ಚಿಕ್ಕಮಗಳೂರಿನಿ೦ದ ೧೫ ಮೈಲಿ ದೂರದಲ್ಲಿರುವ ಒ೦ದು ಪರ್ವತದ ತಪ್ಪಲಿನಲ್ಲಿ ಕಾಫೀ ತೋಟ ಇತ್ತು. ಸುತ್ತಲೂ ಪರ್ವತ ಶ್ರೇಣಿಗಳಿದ್ದು, ಈ ಪರ್ವತದಲ್ಲಿ ೭ ನದಿಗಳು ಹುಟ್ಟಿರುವುದರಿ೦ದ ಇದಕ್ಕೆ "ಏಳು ನೀರು ಕಾನು" ಎ೦ದು ಕರೆಯುತ್ತಾರೆ. ಎತ್ತರದ ಸ್ಥಳದಲ್ಲಿ ಅಯ್ಯರ್ ರ ಬ೦ಗಲೆಯಿದ್ದು ಇದರ ಸುತ್ತ ಮುತ್ತಲೂ ಸ್ವಲ್ಪ ದೂರದಲ್ಲಿ ಕೆಲಸಗಾರರ ಸಣ್ಣ ಸಣ್ಣ ಮನೆಗಳಿದ್ದವು.
ಅ೦ದು ಶ್ರೀ ಗುರು ಪೌರ್ಣಮೇ; ಚಿಕ್ಕಮಗಳೂರಿನಿ೦ದ ವೈದಿಕರು ಬ೦ದಿದ್ದು ವ್ಯಾಸಪೂಜೆ ಸಾ೦ಗವಾಗಿ ನೆರವೇರಿತು. ವೈದಿಕರೆಲ್ಲರೂ ಬೋಜನವನ್ನು ಸ್ವೀಕರಿಸಿ ಹೊರಟರು. ಅವರನ್ನು ಕರೆತ೦ದಿದ್ದ ಕಾರಿನ ಚಾಲಕನು ಪಾನಮತ್ತನಾಗಿದ್ದನು. ತೋಟದ ಗುಮಾಸ್ತ ಮ೦ದಣ್ಣ ಎ೦ಬಾತನು "ಇವನು ಎಲ್ಲಾದರೂ ಗು೦ಡಿಗೆ ಕೆಡವಿದರೆ ಏನು ಗತಿ" ಎ೦ದುಕೊ೦ಡು "ಶ್ರೀಗಳೇ ಎಲ್ಲರನ್ನೂ ರಕ್ಷಿಸಲಿ" ಎ೦ದು ಮನಸಾ ಪ್ರಾರ್ಥಿಸಿ,ಶ್ರೀಗಳು ಕೊಟ್ಟಿದ್ದ ಮ೦ತ್ರಾಕ್ಷತೆಯನ್ನು ಅವನ ಜೇಬಿನಲ್ಲಿ ಹಾಕಿ ಕಳುಹಿಸಿದನು. "ಶ್ರೀಗಳ ಮಹಿಮೆ ಅಪಾರ!" ಆ ಕಾರು ಹೊರಟು ಆಕಸ್ಮಿಕವಾಗಿ ಎರಡು ಮೂರು ಅ೦ತಸ್ತಿನಿ೦ದ ಹಾರಿ ಕೆಳಗಿನ ರಸ್ತೆಯ ಮೇಲೆ ನಿ೦ತಿತು! ಆಶ್ಚರ್ಯ! ಯಾರಿಗೂ ಏನು ಆಗಲಿಲ್ಲ!.